Showing posts with label ಅನುಭವ. Show all posts
Showing posts with label ಅನುಭವ. Show all posts

Sunday, December 12, 2021

🎶🤗♥

ನಮ್ಮ ಮನಸ್ಥಿತಿ ಯಾವಾಗಲೂ ಒಂದೇ ತರ ಇರಲ್ಲ ಆಗಾಗ ಯಾವುದೋ ಕಾರಣಕ್ಕೆ ಏರುಪೇರು ಆಗುತ್ತಾ ಇರುತ್ತದೆ ನಾವು ಇಂಗ್ಲೀಷ್ ಅಲ್ಲಿ ಮೂಡ್ ಸ್ವಿಂಗ್ಸ್ ಅಂತೀವಲ್ಲ ಅದೇ. ಕೆಲವೊಂದು ಸಲ ನಮ್ಮ ಮನಸ್ಸಿಗೆ ತುಂಬಾ ಬೇಜಾರಾದಾಗ ನಮಗೆ ಬೇರೆ ಯಾವ ವಿಷಯದಲ್ಲೂ ಆಸಕ್ತಿ ಇರುವುದಿಲ್ಲ ಒಂಟಿಯಾಗಿ ಇರಲು ಬಯಸುತ್ತೇವೆ. ಮನಸ್ಸಿಗೆ ಸಮಾಧಾನ ಆಗುವಂತೆ ಮಾಡಲು ಏನಾದರೂ ಮಾಡುತ್ತೇವೆ. ನಮಗೆ ಮೂಡ್ ಸರಿ ಇಲ್ಲ ಅಂತ ಅನಿಸಿದಾಗಲೆಲ್ಲ ನಾವು ಹೆಚ್ಚಾಗಿ ನಮಗೆ ಇಷ್ಟ ಆಗುವ ಹಾಡನ್ನು ಕೇಳಲು ಬಯಸುತ್ತೇವೆ. ಸಂಗೀತಕ್ಕೆ ಮನಸ್ಸಿಗೆ ಮುದ ನೀಡುವ ಒಂದು ಶಕ್ತಿಯಿದೆ. ಸಂಗೀತ ನಮ್ಮನ್ನು ಬೇರೊಂದು ಲೋಕಕ್ಕೆ ಕರೆದುಕೊಂಡು ಹೋಗುತ್ತದೆ ಹೊಸ ಹುರುಪು ಉತ್ಸಾಹ ತುಂಬುತ್ತದೆ.  
ಹಾಗಾಗಿ ಮೂಡ್ ಸರಿ ಇಲ್ಲದ ಸಮಯದಲ್ಲಿ ಕೇಳೋಕೆ ಅಂತಾನೆ ನಮ್ಮ ಪ್ಲೇಲಿಸ್ಟ್ ಕೆಲವೊಂದು ಹಾಡುಗಳು ಇರುತ್ತೆ. 
ನನಗೆ ಬೇಜಾರಾದಾಗ, ಮನಸ್ಸು ಸರಿ ಇಲ್ಲ ಅಂತ ಅನಿಸುವಾಗ ಅಥವಾ ಏನೋ ಭಯ, ಚಿಂತೆ ಕಾಡಿದಾಗ ನಾನು ಜಾಸ್ತಿ ಕೇಳುವ ಕೆಲವು ಹಾಡುಗಳು ಈ ಕೆಳಗಿನಂತೆ ಇದೆ.

1.  ಅರಳುವ ಹೂವುಗಳೇ



▪ ಚಿತ್ರ: ಮೈ ಆಟೋಗ್ರಾಫ್ (2006)
▪ ಹಾಡು : ಅರಳುವ ಹೂವುಗಳೇ
▪ ಗಾಯಕಿ :  ಕೆ.ಎಸ್ ಚಿತ್ರಾ
▪ ಸಂಗೀತ : ಭಾರದ್ವಾಜ್
▪ ಸಾಹಿತ್ಯ : ಕೆ. ಕಲ್ಯಾಣ್

2006ರಲ್ಲಿ ತೆರೆ ಕಂಡ ಮೈ ಆಟೋಗ್ರಾಫ್ ಚಿತ್ರದ ಈ ಹಾಡು ಅಂದ್ರೆ ಎಲ್ಲರಿಗೂ ಇಷ್ಟ.. ಈ ಹಾಡಿನಲ್ಲಿ ಅಂತಹ ಸೆಳೆತ ಇದೆ, ಮನಸ್ಸಿಗೆ ಧೈರ್ಯ ತುಂಬುವ ಶಕ್ತಿ ಇದೆ, ನೋವುಗಳ ಮರೆಸಿ ನಗು ತರುವ ಸಾಮರ್ಥ್ಯ ಇದೆ.  ಈ ಹಾಡನ್ನು ಈಗ ಕೇಳಿದರು ಅದೇ ಹೊಸತನ 
 ಅದೇ ಅನುಭವ ಅಗುತ್ತದೆ.

2. ಏನಾಗಲಿ ಮುಂದೆ ಸಾಗು ನೀ


▪ ಚಿತ್ರ : ಮುಸ್ಸಂಜೆ ಮಾತು(2008)
▪ ಹಾಡು : ಏನಾಗಲಿ ಮುಂದೆ ಸಾಗು ನೀ
▪ ಗಾಯಕ : ಸೋನು ನಿಗಮ್
▪ ಸಾಹಿತ್ಯ :ವಿ. ಶ್ರೀಧರ್
https://youtu.be/f6636xqsLGc
ಮುಸ್ಸಂಜೆ ಮಾತು ಚಿತ್ರ  ಅಂದ ಕೂಡಲೇ ನೆನಪಾಗುವುದೇ ಈ ಹಾಡು. ಈ ಹಾಡು  ಎಲ್ಲರ ಅಚ್ಚುಮೆಚ್ಚು.  ಈಗಲೂ ಕೆಲವರ ಫೋನಿನಲ್ಲಿ  ಇದೇ ಹಾಡು callertune ಇದೆ.

3. ಹಾರು ಹಾರು
▪ ಚಿತ್ರ : ನಿನ್ನಿಂದಲೇ(2014)
▪ ಹಾಡು : ಹಾರು ಹಾರು
▪ ಗಾಯಕರು : ಸ್ವೀಕರ್, ಚೈತ್ರಾ ಹೆಚ್.ಜಿ
▪ ಸಾಹಿತ್ಯ : ಕವಿರಾಜ್

ನಿನ್ನಿದಲೇ ಚಿತ್ರದ ಈ ಹಾಡು ನನಗೆ ತುಂಬಾ ಇಷ್ಟ. 
ಹಾರು ಹಾರು ಹಾರು ರೆಕ್ಕೆ ಬಿಚ್ಚಿ ಹಾರು ಬಿಟ್ಟು ಬಿಡೆ ಇನ್ನು ಬೇಜಾರು
ನೂರು ಕೊಹಿನೂರು ನೀನು ನಕ್ರೆ ಚೂರು ನಕ್ಕು ಬಿಡೆ
ಈಗ ಒಂಚೂರು
ನೀ ನಕ್ಕರೆ ನಗುವುದು ಜಗವಿದು ಕನ್ನಡಿ
ಮುನ್ನಡೆಯುತ ಹೋದರೆ ಗುರಿಗಳು  ಕಾಲಡಿ
ಏನಾದ್ರೂ take it easy 
ಗೆಲ್ಲೋಕೆ ಇಲ್ಲಿ ಬಾಜಿ
ಏಷ್ಟು ಚೆನ್ನಾಗಿದೆ ಈ ಸಾಲುಗಳು.. 

4. ಪವರ್ ಆಫ್ ಯೂತ್



▪ ಚಿತ್ರ: ಯುವರತ್ನ (2021)
▪ ಹಾಡು: ಪವರ್ ಆಫ್ ಯೂಥ್
▪ ಗಾಯಕ: ನಕಾಶ್ ಅಜೀಜ್
▪ ಸಾಹಿತ್ಯ: ಸಂತೋಷ್ ಆನಂದ್ರಾಮ್
▪ ಸಂಗೀತ: ತಮನ್ ಎಸ್
ಈ ಹಾಡಿನ ಶೀರ್ಷಿಕೆಯಂತೆ  ಹಾಡಿನಲ್ಲಿ ಪವರ್ ಇದೆ. ಯುವ ಜನತೆಗೆ ಹೇಳಿ ಮಾಡಿಸಿರುವ ಹಾಗಿದೆ ಈ ಹಾಡು. ಸಂತೋಷ್ ಆನಂದ್ರಾಮ್ ಅವರು ಅದ್ಬುತವಾಗಿ ಈ ಹಾಡಿನ ಸಾಹಿತ್ಯ ಬರೆದಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಪ್ರತಿ ಚಿತ್ರದಲ್ಲಿಯೂ ಇಂತಹದೊಂದು ಪವರ್ಫುಲ್ ಹಾಡು ಇದ್ದೇ   ಇರುತ್ತದೆ.

5.ಕುಟ್ಟಿ ಸ್ಟೋರಿ

▪ ಚಿತ್ರ : ಮಾಸ್ಟರ್ (2020)
▪ ಹಾಡು : ಕುಟ್ಟಿ ಸ್ಟೋರಿ
▪ ಗಾಯಕರು : ದಳಪತಿ ವಿಜಯ್ ಮತ್ತು ಅನಿರುದ್ಧ ರವಿಚಂದರ್
▪ ಸಂಗೀತ : ಅನಿರುದ್ಧ ರವಿಚಂದರ್
▪ಅರುಣರಾಜ ಕಾಮರಾಜ್ 

ಕುಟ್ಟಿ ಸ್ಟೋರಿ ಹಾಡು ಅಂದ್ರೆ ನನಗೆ ತುಂಬಾ ತುಂಬಾ ಇಷ್ಟ. ಈ ಹಾಡು ರಿಲೀಸ್ ಆದ ದಿನದಿಂದ ಈಗಿನವರೆಗೆ ಅದೆಷ್ಟು ಸಲ ಕೇಳಿದ್ದೀನೋ ಗೊತ್ತಿಲ್ಲ ಆದರೆ ಪ್ರತಿ ದಿನ ಈ ಹಾಡು ಕೇಳ್ತಾ ಇರ್ತೀನಿ. ಕೇಳಿದಷ್ಟು ಮತ್ತೆ ಕೇಳಬೇಕು ಅನಿಸುತ್ತೆ. ಮೂಡ್ ಸರಿ ಇಲ್ಲ ಅಂದ್ರೆ ಈಗ ಮೊದಲು ನೆನಪಾಗುವ ಹಾಡು ಅಂದ್ರೆ ಇದೇನೇ.   ನಾನು ಈ ಹಾಡಿನ ಅಭಿಮಾನಿ.
Life is very short nanba
Always be happy 

6. ಇದುವುಂ ಕಡಂದು ಪೋಗುಂ


▪ ಚಿತ್ರ : ನೆಟ್ರಿಕನ್(2021)
▪ ಹಾಡು: ಇದುವುಂ ಕಡಂದು ಪೋಗುಂ
▪ ಗಾಯಕ: ಸಿದ್ ಶ್ರೀರಾಮ್
▪ ಸಂಗೀತ ಸಂಯೋಜನೆ: ಗಿರೀಶ್
▪ ಸಾಹಿತ್ಯ:  ಕಾರ್ತಿಕ್ ನೇತಾ
ಸಿದ್ ಶ್ರೀರಾಮ್ ಅವರು ಹಾಡಿರುವ ಈ ಹಾಡು 2021ರಲ್ಲಿ ತೆರೆ ಕಂಡ netrikann ಚಿತ್ರದ ಹಾಡು. ಈ ಚಿತ್ರ ನೋಡಿದವರಿಗೆ ಈ 
ಹಾಡು ಇನ್ನೂ ಚೆನ್ನಾಗಿ ಅರ್ಥ ಆಗುತ್ತೆ.

ಮನಸಿನ ನೋವನ್ನು ಗುಣಪಡಿಸುವ, ಹೊಸ ಭರವಸೆ ತರಿಸುವ, ಏನೋ ಹೊಸ ಉತ್ಸಾಹ ತುಂಬುವ ಹಾಡುಗಳಿವು. ಈ ಎಲ್ಲಾ ಹಾಡುಗಳು ನನಗೆ ತುಂಬಾ ಇಷ್ಟ.
ಇದೇ ಥರ ನಿಮಗೂ ಇಷ್ಟ ಆಗುವ ಹಾಡುಗಳು ಬೇರೆ ಇರಬಹುದು ಆ ಹಾಡುಗಳು ನಿಮಗೆ ಧೈರ್ಯ ತುಂಬಹುದು ಖುಷಿ ತರಬಹುದು.


ನಾನು ಹೇಳಿರುವ ಹಾಡುಗಳಲ್ಲಿ ಕೆಲವು   ಹಾಡು ನಿಮಗೆ ಹೊಸದಾಗಿದ್ದರೆ ಅದನ್ನು ಈಗಲೇ  ಕೇಳಿ ನೋಡಿ ನಿಮಗೂ ಇಷ್ಟವಾಗಬಹುದು. ಒಂದು ಬಾರಿ ಹಾಗೆ ಕಮೆಂಟ್ಸ್  ಕಡೆಗೆ ಕಣ್ಣು ಹಾಯಿಸಿ ಅದೆಷ್ಟೋ ಜನ ಈಗಲೂ ಹಳೆಯ ಹಾಡುಗಳನ್ನು ಕೇಳಿ ಆನಂದಿಸುತ್ತಾರೆ ನೋವುಗಳನ್ನು ಮರೆಯುತ್ತಾರೆ.





Sunday, September 12, 2021

ಪರೀಕ್ಷೆ

ಪರೀಕ್ಷೆ ಅಂದರೆ ಯಾರಿಗೆ ತಾನೇ ಭಯ, ಚಿಂತೆ ಇರಲ್ಲ ಹೇಳಿ? ಅದೆಷ್ಟು ಸಲ ಪರೀಕ್ಷೆ ಬರೆದಿದ್ದರು ಪ್ರತೀ ಸಲ ಪರೀಕ್ಷೆ ಬರೆಯಲು ಹೋದಾಗ ಅದೇ ಚಿಂತೆ,ಅದೇ ಭಯ ಕಾಡುತ್ತದೆ.ಕೆಲವರಿಗೆ ಪರೀಕ್ಷೆ ಭಯದಿಂದ ಜ್ವರನೇ ಬರುತ್ತೆ.ಇನ್ನು ಕೆಲವರಂತೂ ಪರೀಕ್ಷೆಯ ಹಿಂದಿನ ದಿನ ನಿದ್ದೆ ಬಿಟ್ಟು ಓದಿಕೊಂಡು ಬಂದಿರುತ್ತಾರೆ. ನಿದ್ದೆ ಬಿಟ್ಟು ತಲೆ ನೋವು ಒಂದು ಕಡೆ ಇರುತ್ತೆ ಇನ್ನೊಂದು ಕಡೆ ಭಯ. ಯಪ್ಪಾ ನನಗೆ ನಿದ್ದೆ ಬಿಟ್ಟು ಓದುವುದು ಅಂದ್ರೆ ಆಗಲ್ಲ ಚೆನ್ನಾಗಿ ನಿದ್ದೆ ಮಾಡಿದ್ರೆ ಮಾತ್ರ ನನಗೆ ಪರೀಕ್ಷೆ ಬರೆಯೋದಕ್ಕೆ ಆಗೋದು. ರಾತ್ರಿ ನಿದ್ದೆಗಾಗಿ ಓದುವುದನ್ನು ಬಿಟ್ಟು ಮಲಗಿದ್ದು ಉಂಟು ಆದರೆ ಓದುವುದಕಾಗಿ ನಿದ್ದೆ ಬಿಟ್ಟು ಓದಿದ ಪ್ರಸಂಗ ಬಾರಿ ಕಡಿಮೆ. ಆ ಕಡೆ ನಿದ್ದೇನು ಇಲ್ಲ ಈ ಕಡೆ ಸರಿಯಾಗಿ ಓದುವುದಕ್ಕೂ ಆಗಲ್ಲ. ನಿದ್ದೆ ಕೆಟ್ಟು ಪರೀಕ್ಷೆ ಬರೆಯೋದಕ್ಕೆ ಹೋದರೆ ನಾನು ಪರೀಕ್ಷೆ ಬರೆಯೋ ಬದಲು ನಿದ್ದೆ ಮಾಡ್ತೇನೆ ಅಷ್ಟೇ. ಈ ನಿದ್ದೆ ಬಿಟ್ಟು ಓದಿಕೊಂಡು ಚೆನ್ನಾಗಿ ಪರೀಕ್ಷೆ ಬರಿಯೋದು ತುಂಬಾನೇ ಕಷ್ಟ ಇದೆಲ್ಲ ನಿಭಾಯಿಸಿಕೊಂಡು ಪರೀಕ್ಷೆ ಬರೆಯೋರೆಲ್ಲ ತುಂಬಾನೇ ಗ್ರೇಟ್ ಅನ್ಸತ್ತೆ ನನಗೆ ಯಾಕಂದ್ರೆ ನನಗೆ ಹೇಗೆ ನಿದ್ದೆ ಬಿಟ್ಟು ಓದೋದು ತುಂಬಾನೇ ಕಷ್ಟದ ಕೆಲಸ.


ಚಿತ್ರಕೃಪೆ - ಅಂತರ್ಜಾಲ


ಇನ್ನು ಈ ಪರೀಕ್ಷೆ ಶುರು ಆಗುವ 30 ನಿಮಿಷದ ಮೊದಲೇ ನಮ್ಮನ್ನು ಪರೀಕ್ಷಾ ಕೊಠಡಿಯಲ್ಲಿ ಕೂರಿಸುತ್ತಾರೆ, ಆ 30 ನಿಮಿಷಗಳಲ್ಲಿ ಆಗೋ ಭಯ ಅಷ್ಟಿಷ್ಟಲ್ಲ ಪ್ರಶ್ನೆಪತ್ರಿಕೆ ಸುಲಭವಾಗಿ ಇರುತ್ತೋ ಅಥವಾ ಕಷ್ಟವಾಗಿ ಇರುತ್ತೋ ಹಾಗೆ ಹೀಗೆ ಏನೇನೋ ಆಲೋಚನೆಗಳು ತಲೆಯಲ್ಲಿ ಓಡುತ್ತಾ ಇರುತ್ತೆ. ಪ್ರಶ್ನೆಪತ್ರಿಕೆ ಕೈಗೆ ಸಿಗುವಷ್ಟರಲ್ಲಿ ನಾವು ಓದಿದ್ದು ಭಯ ಅನ್ನುವ ನದಿಯಲ್ಲಿ ಕೊಚ್ಚಿ ಹೋಗಿರುತ್ತೆ ಅಷ್ಟೇ. ಪ್ರಶ್ನೆಪತ್ರಿಕೆ ಕೈಗೆ ಸಿಕ್ಕ ಮೇಲೆ ಒಂದು ಸಲ ಪೂರ್ತಿಯಾಗಿ ಎಲ್ಲಾ ಪ್ರಶ್ನೆಗಳತ್ತ ಕಣ್ಣು ಹಾಯಸಲು ಆರಂಭಿಸಿದಾಗ, ಮೊದಲನೇ ಪ್ರಶ್ನೆಗೆ ಉತ್ತರ ಗೊತ್ತಿಲ್ಲ ಎಂದಾದರೆ ಅಲ್ಲಿಗೆ ಕಥೆ ಮುಗಿಯಿತು ಬಾಕಿ ಗೊತ್ತಿರುವ ಉತ್ತರಗಳು ಮರೆತು ಹೋಗುತ್ತೆ. ಉತ್ತೀರ್ಣರಾಗಬೇಕಾದರೆ ಉತ್ತರ ಗೊತ್ತಿಲ್ಲದ ಪ್ರಶ್ನೆಗಳನ್ನು ಹಾಗೆ ಬದಿಗಿರಿಸಿ ಮುಂದಿನ ಪ್ರಶ್ನೆಗೆ ಜಿಗಿಯಬೇಕಲ್ಲವೇ! ಏನೋ  ಗೊತ್ತಿರುವಷ್ಟು, ನೆನಪಿಗೆ ಬಂದಷ್ಟು ಬರೆದು ಮುಗಿಸಬೇಕು ಅಷ್ಟೇ. ಗೊತ್ತಿರುವಷ್ಟು ಬರೆದು ಮುಗಿಸಿ ಆಚೆ ಕಣ್ಣು ಹಾಯಿಸಿದರೆ ಎಲ್ಲರೂ ಗಂಭೀರವಾಗಿ ಉತ್ತರಪತ್ರಿಕೆಯಲ್ಲಿ ಬರೆಯುತ್ತಿದ್ದರೆ ನಾನು ಮಾತ್ರ ಉತ್ತರ ತಿಳಿಯದೇ ಏನು ಬರೆಯೋದು ಅನ್ನುವ ಚಿಂತೆಯಲ್ಲಿ ಮುಳುಗಿದ್ದೆ . ಆದರೆ ಏನು ಮಾಡುವುದು ಈ ಪರೀಕ್ಷೆ ಎಂಬ ಯುದ್ಧದ್ದಲ್ಲಿ ನಾವು ಒಂಟಿಯಾಗಿಯೇ ಹೊರಾಡಬೇಕು ಯಾರು ನಮ್ಮ ನೆರವಿಗೆ ಬರುವುದಿಲ್ಲ ಬರಲಾಗುವುದು ಇಲ್ಲ. ಉತ್ತಮ ಅಂಕ ಪಡೆಯಬೇಕು ಇಲ್ಲ ಕನಿಷ್ಟ ಪಕ್ಷ ಉತ್ತೀರ್ಣರಾಗಿ ಪರೀಕ್ಷೆ ಎಂಬ ಯುದ್ಧ ಗೆಲ್ಲಬೇಕು, ಅದಕ್ಕಾಗಿ 3 ಗಂಟೆ ಪರೀಕ್ಷೆಯ ಕೊಠಡಿಯಲ್ಲಿ ಪೆನ್ನು ಹಿಡಿದು ಉತ್ತರಪತ್ರಿಕೆಯಲ್ಲಿ ತಲೆ ಉಪಯೋಗಿಸಿ ಏನೋ ಉತ್ತರ ಬರೆಯಬೇಕು. ಸರಿಯಾಗಿ ನಿದ್ದೇನು ಮಾಡದೆ ಸರಿಯಾಗಿ ಓದೋಕೂ ಆಗದೆ ಚಡಪಡಿಸಿವುದಕ್ಕಿಂತ ಆರಾಮಾಗಿ ಮಲಗಿ ಆದಷ್ಟು ಓದುದುವುದೇ ಉತ್ತಮ ಅನ್ನುವುದು ನನ್ನ ಅಭಿಪ್ರಾಯ. ಆಮೇಲೆ ನಿದ್ದೆ ಬಿಟ್ಟು ತಲೆ ಕೆಟ್ಟು ಪರೀಕ್ಷೆ ಬರೆಯೋ 

ಹೇಗೋ ಏನೋ 3 ಗಂಟೆ ಕಳೆದು ಪರೀಕ್ಷಾ ಕೊಠಡಿಯಿಂದ ಆಚೆ ಬರುವ ಹೊತ್ತಿಗೆ ತಲೆ ನೋವು ಶುರು ಆಗಿರುತ್ತೆ. ಆಚೆ ಬಂದು ನೋಡಿದರೆ ಸಾಕು ಕೆಲವರು ಪ್ರಶ್ನೆಪತ್ರಿಕೆಯ ಉತ್ತರಗಳ ಬಗ್ಗೆ ಚರ್ಚಿಸಲು ಶುರು ಮಾಡಿಕೊಂಡಿರುತ್ತಾರೆ , ಮೊದಲೇ ಉತ್ತರ ಗೊತ್ತಿಲದೇ ಏನೋ ಒಂದು ಉತ್ತರ ಬರೆದು ಬಂದಿರುತ್ತೇವೆ ಇನ್ನು ಇವರ ಚರ್ಚೆ ಕೇಳಿದ್ರೆ ಇರೋ ತಲೆ ಕೆಡುವುದು ಪಕ್ಕಾ. ಆಮೇಲೆ ತಲೆ ಕೆಟ್ಟರೆ ಮುಂದಿನ ಪರೀಕ್ಷೆ ಬರೆಯೋದು ಯಾರು ಅಲ್ವಾ? ಅದಕ್ಕೆ ನಾನು ಪರೀಕ್ಷಾ ಕೊಠಡಿಯಿಂದ ಆಚೆ ಬಂದ ನಂತರ ಬ್ಯಾಗ್ ಹಾಕಿಕೊಂಡು ಸೀದ ಮನೆಗೆ ಹೊರಡೋದು. 

ಇನ್ನು ಮನೆಗೆ ಬಂದ ತಕ್ಷಣ ಅಮ್ಮ ಕೇಳುವ ಮೊದಲ ಪ್ರಶ್ನೆನೇ "ಹೇಗಿತ್ತು ಇವತ್ತಿನ ಪರೀಕ್ಷೆ? ಚೆನ್ನಾಗಿ ಬರೆದೆ ತಾನೇ ಒಳ್ಳೆ ಅಂಕ ಸಿಗುತ್ತಾ ಇಲ್ವಾ"? ಹೀಗೆ ಅಮ್ಮ ಕೇಳೋದು ಹೊಸತೇನಲ್ಲ ಯಾವಾಗ್ಲೂ ಇದೇ ತರ ಕೇಳೋದು ಅಂತ ನನಗೆ ಗೊತ್ತು,ಅದಕ್ಕೆ ನಾನು ಉತ್ತರ ರೆಡಿ ಮಾಡಿಕೊಂಡಿರುತ್ತೇನೆ. ಅಯ್ಯೋ ಅಮ್ಮಾ ಇವತ್ತಿನ ಪರೀಕ್ಷೆ ಎಷ್ಟು ಕಷ್ಟ ಇತ್ತು ಯಾವುದಕ್ಕೂ ಸರಿಯಾದ ಉತ್ತರ ಗೊತ್ತಿರಲಿಲ್ಲ ,ನನಗೆ ಮಾತ್ರ ಅಲ್ಲಾ ಎಲ್ಲರಿಗೂ ಕಷ್ಟ ಆಗಿತ್ತು. ಕಡಿಮೆ ಅಂಕ ಬಂದ್ರೆ ಬೈಯೋದ್ಯಕ್ಕೆ ರೆಡಿ ಆಗಿರು ಅಮ್ಮ ಅಂತ ಹೇಳುತ್ತಿದ್ದೆ ನಾನು ಹೀಗೆ ಹೇಳೋದು ಹೊಸತೇನಲ್ಲ ನಾನು ಪ್ರತಿ ಸಲ ಇದೇ ಮಾತು ಹೇಳುತ್ತಿದ್ದೆ ಅದು ಅಮ್ಮನಿಗೂ ಗೊತ್ತಿರುವ ವಿಚಾರ. ಅಮ್ಮ ಪಾಪ ಏನೂ ಹೇಳದೆ ನನಗೆ ಸಮಾಧಾನ ಮಾಡುತ್ತಿದ್ದರು. ಪರ್ವಾಗಿಲ್ಲ ಬಿಡು ಮುಂದಿನ ಸಲ ಚೆನ್ನಾಗಿ ಬರೆದು ಒಳ್ಳೆ ಅಂಕ ಪಡ್ಕೊಂಡ್ರೆ ಆಯ್ತು ಅಂತ ಹೇಳಿ ಸುಮ್ಮನಾಗುತ್ತಿದ್ರು. ನನ್ನ ಮಗಳಿಗೆ ಒಳ್ಳೆ ಅಂಕ ಬಂದು ಪಾಸ್ ಆಗ್ಲಿ ಅಂತ ಅದೆಷ್ಟು ದೇವರಿಗೆ ಹರಕೆ ಕಟ್ಟಿಕೊಂಡಿರುತ್ತಾರೆ ಅಂತ ಅವರಿಗೆ ಅಷ್ಟೇ ಗೊತ್ತು ಎಲ್ಲಾ ತಾಯಂದಿರು ಹೀಗೇನೇ...


ಪರೀಕ್ಷೆ ದಿನ ಆಗೋ ಭಯ ಒಂದು ರೀತಿ ಆದ್ರೆ ಇನ್ನು ಪರೀಕ್ಷೆ ಮುಗಿಸಿದ ಮೇಲೆ ಫಲಿತಾಂಶದ ಭಯ ಇನ್ನೊಂದು ರೀತಿ. ಯಾವುದೋ ಒಂದು ವಿಷಯದಲ್ಲಿ ಚೆನ್ನಾಗಿಯೇ ಬರೆದಿರ್ತಿವಿ ಆವಾಗ ಒಳ್ಳೆ ಅಂಕ ಸಿಗುತ್ತೆ ಅನ್ನೋ ಕಾನ್ಫಿಡೆನ್ಸ್ ಮಾತ್ರ ನಮಗೆ ಇರಲ್ಲ ಆದ್ರೆ ಯಾವುದೋ ವಿಷಯ ಕಷ್ಟ ಇದ್ದು ಆ ಪರೀಕ್ಷೆ ಚೆನ್ನಾಗಿ ಬರಿಯದೇ ಇದ್ದಾಗ ನಮಗೆ ಕಡಿಮೆ ಅಂಕ ಸಿಗಬಹುದು ಅಥವಾ ನಾವು ಫೇಲ್ ಆಗ್ತಿವಿ ಅನ್ನೋ ಕಾನ್ಫಿಡೆನ್ಸ್ ಅದೆಲ್ಲಿಂದ ಬರತ್ತೆ ಅನ್ನೋದು ಗೊತ್ತಾಗಲ್ಲ. ಇನ್ನು ಇವತ್ತು ಫಲಿತಾಂಶ ಪ್ರಕಟ ಆಗುತ್ತೆ ಅಂತ ತಿಳಿದಾಗ ಆಗೋ ಭಯ ಪರೀಕ್ಷೆ ಬರಿಯೋ ಸಮಯದಲ್ಲಿ ಆಗುವ ಭಯಕ್ಕಿಂತ ದುಪ್ಪಟ್ಟಾಗಿರುತ್ತದೆ. ನಾನು ಖಂಡಿತ ಫೇಲ್ ಆಗ್ತೀನಿ ಅನ್ನೋ ಭಯ. ಏನ್ ಮಾಡೋದು ಫಲಿತಾಂಶ ನೋಡಲೇಬೇಕು ಅಲ್ವಾ ಹೇಗೋ ಗಟ್ಟಿ ಮನಸ್ಸು ಮಾಡಿ ನೋಡಿದ್ರೆ ಪಾಸ್ ಅಂತ ಇರುತ್ತೆ. ನಾವ್ ಯಾವಾಗ ಫೇಲ್ ಅಗ್ತಿವಿ ಅಂತ ಅನ್ಕೊಂಡು ಇರ್ತೀವಿ ನೋಡಿ ಆವಾಗ ಪಾಸ್ ಅಂತ ಗೊತ್ತಾದಾಗ ಆಗೋ ಖುಷಿ , ಸಮಾಧಾನ, ನಾವ್ ಚೆನ್ನಾಗಿ ಪರೀಕ್ಷೆ ಬರ್ದು ಪಾಸ್ ಆದಾಗ ಸಿಗೋ ಖುಷಿಗಿಂತ ದುಪ್ಪಟ್ಟಾಗಿ ಇರುತ್ತೆ. ಪಾಸ್ ಅಂತ ಗೊತ್ತಾದಾಗ ಮೊದಲಿದ್ದ ಚಿಂತೆ ಭಯ ಆ ಕ್ಷಣದಲ್ಲಿ ಮಾಯ ಆಗುತ್ತೆ. ಪರೀಕ್ಷೆಯಲ್ಲಿ ನಾನು ಓದಿದ್ದು ಮರೆತು ಹೋಗಿ ನನ್ನ ಜ್ಞಾಪನಶಕ್ತಿ ನನಗೆ ಕೈ ಕೊಟ್ಟಿರಬಹುದು ಆದರೆ ನಾನು ನಂಬಿದ ದೇವರು ಕೈ ಕೊಟ್ಟಿಲ್ಲ. ಅಮ್ಮನ ಹರಕೆ ಮತ್ತು ಹಾರೈಕೆ ಎರಡು ಇದ್ದರೆ ಸಾಕು ನಮಗೆ ಯಾವತ್ತಿಗೂ ಯಾವ ವಿಷಯದಲ್ಲಿಯೂ ಸೋಲು ನಷ್ಟ ಉಂಟಾಗುವುದಿಲ್ಲ, ಹಾಗೊಂದು ವೇಳೆ ಫೇಲ್ ಆದರೂ ಅದಕ್ಕೆ ಚಿಂತೆ ಪಡಬೇಕಿಲ್ಲ ಮತ್ತೊಂದು ಸಲ ಪರೀಕ್ಷೆ ಬರೆದು ಇನ್ನೂ ಉತ್ತಮ ಅಂಕ ಪಡೆದುಕೊಳ್ಳಬಹುದು. ಒಂದು ಪರೀಕ್ಷೆ ನಮ್ಮ ಜೀವನವನ್ನು ನಿರ್ಧರಿಸುವುದಿಲ್ಲ , ಜೀವನದಲ್ಲಿ ಎದುರಿಸಬೇಕಾದ ಪರೀಕ್ಷೆಗಳು ತುಂಬಾನೇ ಇವೆ. 

ನನಗೆ ಪವರ್ ಆಫ್ ಯೂಥ್ ಹಾಡಿನ ಸಾಲುಗಳು ನೆನಪಾಯಿತು ಅದೆಷ್ಟು ಚೆನ್ನಾಗಿದೆ ಮತ್ತು ಅಷ್ಟು ನಿಜವಾಗಿದೆ ಅದರ ಕೆಲವು ಸಾಲುಗಳು ನೀವೇ ನೋಡಿ.


ಗೆಲ್ಲಬೇಕು ನೀ ನಿಲ್ಲೋವರೆಗೂ

ನಿಲ್ಲಬೇಕು ನೀ ಗೆಲ್ಲೋವರೆಗೂ

ನಿನ್ನ ಬದುಕಿಗೆ ನೀನೇ ಕನ್ನಡಿ

ನಿನ್ನ ನಂಬಿ ಸಾಗು

 ಪಟ್ಟರೆ ಶ್ರಮವ

ಒಳ್ಳೆಯ ದಿನವ ಕಾಣುವೆ ನೀನು

ಪರೀಕ್ಷೆಯಲ್ಲಿ ಫೈಲ್ ಆಗೋದ್ರು

ಬದುಕು ಕಟ್ಟುವ.


ಪರೀಕ್ಷೆಯಲ್ಲಿ ಫೈಲ್ ಆದ್ರೂ ಪರ್ವಾಗಿಲ್ಲ ಬದುಕು ಕಟ್ಟೋದು ಮುಖ್ಯ. ಪರೀಕ್ಷೆ ಬಗ್ಗೆ ಜಾಸ್ತಿ ತಲೆ ಕೆಡೆಸಿಕಳ್ಳದೆ ಆರಾಮಾಗಿ ಬರೆಯಿರಿ. ಹಿಂದೆ ಆಗಿದ್ದು ಮುಂದೆ ಆಗುವುದು ಎಲ್ಲಾ ಒಳ್ಳೆಯದಕ್ಕೆ. ಏನಾಗಲಿ ಮುಂದೆ ಸಾಗುತ್ತಾ ಇರೋಣ ಅಷ್ಟೇ.

Saturday, August 28, 2021

ಮಾಸ್ಕ್

ನನಗಂತೂ ಮಾಸ್ಕ್ ಅಂತ ಹೇಳುವಾಗಲೇ ಉಸಿರಾಡಲು ಕಷ್ಟವಾದಂತೆ ಅನುಭವ ಆಗುತ್ತದೆ. ಇಡೀ ದಿನ ಮಾಸ್ಕ್ ಧರಿಸಿ ಕುಳಿತುಕೊಳ್ಳುವುದು ಒಂದು ದೊಡ್ಡ ಸಾಹಸವೇ ಸರಿ! ಆದರೆ ಏನು ಮಾಡುವುದು ಈ ಕೊರೋನ ವೈರಸ್ ದಾಳಿಯಿಂದ ತಪ್ಪಿಸಿಕೊಳ್ಳಲು, ನಾವು ಮತ್ತು ನಮ್ಮ ಸುತ್ತಮುತ್ತ ಇರುವವರು ಸುರಕ್ಷಿತವಾಗಿ ಇರಲು ಮಾಸ್ಕ್ ಧರಿಸುವುದು ಅನಿವಾರ್ಯವಾಗಿದೆ. 
ನಾವು ಹಿಂದೆ ಎಂದೂ ಅಂದುಕೊಂಡಿರಲಿಲ್ಲ ಕೋರೋನ ಎಂಬ ವೈರಸ್ ನಮ್ಮ ಜೀವದ ಜೊತೆಗೆ ಆಟ ಆಡುವುದಲ್ಲದೆ ನಮ್ಮ ಜೀವನ ಶೈಲಿಯನ್ನು ಹೀಗೆಲ್ಲ ಬದಲಾಯಿಸುತ್ತದೆ ಎಂದು! ಈ ಕೊರೋನ ವೈರಸ್ ಶುರುವಾದ ಮೇಲೇ ಲಾಕ್ಡೌನ್, ಸೀಲ್ಡೌನ್ , ಕ್ವಾರಂಟೈನ್,ಸೋಶಿಯಲ್ ಡಿಸ್ಟೆನ್ಸ್ ಮಾಸ್ಕ್, ಸ್ಯಾನಿಟೈಜರ್, ಈ ಪದಗಳನ್ನೇ ಜಾಸ್ತಿ ಕೇಳಿದ್ದು ಹಾಗೂ ಬಳಸಿದ್ದು. 
ಮಾಸ್ಕ್ ಧರಿಸಿಕೊಂಡು ಆಚೆ ಹೋಗಿ ಬರುವುದು ಅಂದ್ರೆ ತಲೆ ನೋವು, ಹಾಗಂತ ಆಚೆ ಹೋಗದೇ ಇರೋದಕ್ಕೆ ಆಗುತ್ತದೆಯೇ? ಹಾಗೋ ಹೀಗೋ ಅದನ್ನು ಹಾಕಿಕೊಂಡು ಹೋಗಲೇಬೇಕು. 
ಕಳೆದ ಒಂದೂವರೆ ವರ್ಷದಿಂದ ಮಾಸ್ಕ್ ಧರಿಸಿ ಧರಿಸಿ ಈಗ ರೂಢಿ ಆದಂತಿದೆ. ಆದರೆ ಇಡೀ ದಿನ ಮಾಸ್ಕ್ ಹಾಕಿಕೊಂಡು ಇರೋದು ತುಂಬಾ ಕಷ್ಟನೇ. ಬೇರೆ ಸಮಯದಲ್ಲಿ ಹೇಗೋ ಪರ್ವಾಗಿಲ್ಲ ಆದರೆ ಎಕ್ಸಾಮ್ ಸಮಯದಲ್ಲಿ ಸಿಕ್ಕಾಪಟ್ಟೆ ಹಿಂಸೆ ಆಗುತ್ತೆ. ಒಂದು ಕಡೆ ಆನ್ಲೈನ್ ಕ್ಲಾಸ್ ಕೇಳಿ ಆಫ್ಲೈನ್ ಎಕ್ಸಾಮ್ ಬಾರಿಯೋ ಟೆನ್ಶನ್ ಇನ್ನೊಂದು ಕಡೆ ಈ ಮಾಸ್ಕ್ ನಿಂದ ಉಸಿರು ಕಟ್ಟಿದ ಹಾಗೆ ಆಗುತ್ತದೆ. 3 ಗಂಟೆ ಎಕ್ಸಾಮ್ ಬರೆದು  ಆಚೆ ಬರಬೇಕಾದರೆ ಮುಖ ಮತ್ತು ಮಾಸ್ಕ್ ಎರಡೂ ಬೆವರಿ ನೀರಾಗಿ ಹೋಗಿರುತ್ತೆ. ಆದರೆ ಮಾಸ್ಕ್ ಅನ್ನು ದೂರುವ ಹಾಗಿಲ್ಲ ಇದೆಲ್ಲ ಕೋರೋನ ತಂದ ಪಜೀತಿ ಅಷ್ಟೇ ಅದರಿಂದ ಸುರಕ್ಷಿತವಾಗಿ ಇರಬೇಕಾದರೆ ಇದೆಲ್ಲ ಅನುಭವಿಸಲೇಬೇಕು.
ಚಿತ್ರಕೃಪೆ - ಅಂತರ್ಜಾಲ


 
ಇದೆಲ್ಲ ಒಂದು ಕಡೆ ಇರ್ಲಿ, ನಾನು ದಿನ ಕಾಲೇಜಿಗೆ ಹೋಗುವಾಗ ಗಮನಿಸುತ್ತೇನೆ ಕೆಲವರು ತಾವು ಧರಿಸಿರುವ ಬಟ್ಟೆಗೆ ಮ್ಯಾಚ್ ಆಗುವಂತೆ ಮಾಸ್ಕ್ ಹಾಕಿಕೊಂಡಿರುತ್ತಾರೆ. ಅಲ್ಲಾ ಈ ಕಲರ್ ಕಲರ್ , ಡಿಸೈನ್ ಡಿಸೈನ್ , ಮ್ಯಾಚ್ ಆಗುವ ಮಾಸ್ಕ್ ಹುಡುಕಿಕೊಂಡು ಕೂರುವಷ್ಟು ತಾಳ್ಮೆ, ಸಮಯ ಅದೆಲ್ಲಿಂದ ಸಿಗುತ್ತೆ ಅವರಿಗೆಲ್ಲ? ಇರ್ಲಿ ಬಿಡಿ ಎಲ್ಲ ಅವರವರ ಇಷ್ಟ ನೋಡೋ ನಮಗೆ ಯಾಕೆ ಕಷ್ಟ ಅಲ್ವಾ? ಸರಿಯಾಗಿ ಮಾಸ್ಕ್ ಹಾಕಿದ್ರೆ ಆಯ್ತು ಯಾವ ಕಲರ್ ಆದರೇನು ಯಾವ ಡಿಸೈನ್ ಆದರೇನು.

ಈ ಮಾಸ್ಕ್ ಇಲ್ಲದೆ ಹೊರಗಡೆ ಹೋಗುವುದು ಯಾವಾಗ? ಎಲ್ಲವೂ ಮೊದಲಿನಂತೆ ಆಗುವುದು ಯಾವಾಗ? ಈ ಕೋರೋನ ವೈರಸ್ ಇಂದ ಬಿಡುಗಡೆ ಯಾವಾಗ? ಇದೆಲ್ಲ ನಮಗೆ ಯಾರಿಗೂ ಗೊತ್ತಿಲ್ಲ. ಆದಷ್ಟು ಬೇಗ ಎಲ್ಲವೂ ಸರಿಯಾಗಿ ಮತ್ತೆ ಮೊದಲಿನಂತೆ ಆಗಲಿ ಅನ್ನುವುದಷ್ಟೇ ನಮ್ಮ ಆಶಯ. 
ಎಲ್ಲರೂ ಮಾಸ್ಕ್ ಧರಿಸಿ, ಲಸಿಕೆ ತೆಗೆದುಕೊಳ್ಳಿ, ನೀವು ಸುರಕ್ಷಿತವಾಗಿರಿ ನಿಮ್ಮವರನ್ನೂ ಸುರಕ್ಷಿತವಾಗಿ ಕಾಪಾಡಿಕೊಳ್ಳಿ.

ಚಿತ್ರಕೃಪೆ - ಅಂತರ್ಜಾಲ



Saturday, June 19, 2021

ದಾಸವಾಳ


ದಾಸವಾಳ

ಇವತ್ತು ಬೆಳಗ್ಗೆ ಹನಿ ಹನಿ ಮಳೆ ಸುರಿಸುತ್ತಿತ್ತು ನಾನು ಹಾಗೆ ಸುಮ್ಮನೆ ಮನೆಯಿಂದ ಆಚೆ ಬಂದು ತೋಟದ ಕಡೆಗೆ ಹೋದೆ. ಹಾಗೆ ಸುಮ್ಮನೆ ದಾಸವಾಳ ಗಿಡದ ಕಡೆಗೆ ಕಣ್ಣು ಹಾಯಿಸಿದೆ, ದಾಸವಾಳ ಹೂವುಗಳು ಅರಳಿ ಕಂಗೊಳಿಸುತ್ತಿದ್ದವು. ಮಳೆ ಹನಿಗಳು ಆ ದಳಗಳ ಮೇಲೆ ಹರಡಿತ್ತು. ನೋಡಲು ಅದೆಷ್ಟು ಸುಂದರವಾಗಿತ್ತು! ನಾನು  ಕೈಯಲ್ಲಿದ್ದ ಫೋನ್ ತಗೊಂಡು ಹಾಗೆ ಒಂದಷ್ಟು ಫೋಟೋ ಕ್ಲಿಕ್ ಮಾಡಿದೆ.


ಎಷ್ಟು ಸುಂದರ ಈ ದಾಸವಾಳ 

ಮಳೆ ಹನಿಯಲಿ ಕಂಗೊಳಿಸಿದೆ ದಳ

ಇದರ ಬಣ್ಣವು ಕೆಂಪು 

ನೋಡಿದ ಈ ಕಣ್ಣಿಗೆ ಕಂಪು!